Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
ಮಂಗಳೂರು (ದಕ್ಷಿಣ ಕನ್ನಡ): 13 ಮೇ 2020 (ಫಿಕ್ರೋಖಬರ್ ಸುದ್ದಿ) ವಿದೇಶದಿಂದ ಬಂದು ಕ್ವಾರಂಟೈನ್ನಲ್ಲಿ 14 ದಿನಗಳ ಕಾಲ ಇರಲು ಸಮಸ್ಯೆ ಇರುವ ಗರ್ಭಿಣಿಯರು, ಹತ್ತರ ಒಳಗಿನ ಮಕ್ಕಳು, 80ರ ಮೇಲಿನ ವೃದ್ಧರು, ಆರೋಗ್ಯ ಸಮಸ್ಯೆ ಇರುವವರ ಮೊದಲ ಗಂಟಲು ದ್ರವ ತಪಾಸಣೆಯಲ್ಲಿ ನೆಗೆಟಿವ್ ವರದಿ ಬಂದರೆ 3 ದಿನದಲ್ಲಿ ಅವರನ್ನು ಮನೆಗೆ ಕಳುಹಿಸಬಹುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು. ಆದರೆ ಅವರನ್ನು ಹೋಮ್ ಕ್ವಾರಂಟೈನ್ ಮಾಡಬೇಕು ಎಂದು ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೊಳಿಸಿದೆ ಎಂದಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲರ ಗಂಟಲು ದ್ರವ ಪರೀಕ್ಷೆಗೆ ರವಾನಿಸಿದ್ದು, ಈ ವಿಭಾಗದಲ್ಲಿ ಯಾರೆಲ್ಲಾ ಬರುತ್ತಾರೋ ಅವರ ವರದಿ ನೆಗೆಟಿವ್ ಬಂದಲ್ಲಿ ಹೋಮ್ ಕ್ವಾರಂಟೈನ್ ಮುದ್ರೆ ಹಾಕಿ ಮನೆಗೆ ಕಳಿಸಲಾಗುವುದು ಎಂದು ಹೇಳಿದರು. ನಗರಕ್ಕೆ ನಿನ್ನೆ ದುಬೈಯಿಂದ ಆಗಮಿಸಿದ ವಿಮಾನದಲ್ಲಿ 40 ಗರ್ಭಿಣಿಯರಿದ್ದು, ಅವರಿಗೆ ನಿನ್ನೆ, ಇಂದು ಬೆಳಗ್ಗೆ ಸ್ತ್ರೀರೋಗ ತಜ್ಞರ ಸಹಿತ ಆರೋಗ್ಯ ಅಧಿಕಾರಿಗಳ ತಂಡ ಸಮಗ್ರ ಆರೋಗ್ಯ ತಪಾಸಣೆ ಮಾಡಿದೆ. ಜೊತೆಗೆ ಗಂಟಲು ದ್ರವವನ್ನು ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದರು. ನಿನ್ನೆ ದುಬೈನಿಂದ ಬಂದ ವಿಮಾನದಲ್ಲಿ ಪ್ರಯಾಣಿಕರು ಹೊರ ಬರುವಾಗ ಸಾಕಷ್ಟು ಸಮಯವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇದು ವಿಶೇಷ ವಿಮಾನವಾಗಿದ್ದು, ತಲಾ 20ರಂತೆ ವಿಮಾನದಿಂದ ಪ್ರಯಾಣಿಕರನ್ನು ಹೊರ ಕಳಿಸಿ ತಪಾಸಣೆ ಮಾಡಲಾಗುತ್ತದೆ.
ಬಳಿಕ ಕೋವಿಡ್ ಸೋಂಕಿನ ಪರಿಣಾಮ ಸ್ಕ್ರೀನಿಂಗ್, ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಒಂದು ವಿಮಾನ ಲ್ಯಾಂಡ್ ಆದ ಬಳಿ ಕನಿಷ್ಠ ಪಕ್ಷ 3-4 ಗಂಟೆ ಪ್ರಯಾಣಿಕರು ಹೊರ ಬರಲು ಸಮಯ ತಗಲುತ್ತದೆ. ಅಲ್ಲದೆ ಇಮಿಗ್ರೇಷನ್, ಕಸ್ಟಮ್ ಪರಿಶೀಲನೆ ನಡೆಸಲಾಗುತ್ತದೆ. ಇದರಿಂದ ತಡವಾಗೋದು ಸಹಜ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು. ನಿನ್ನೆ ಅನಿವಾಸಿ ಭಾರತೀಯರನ್ನು ದುಬೈನಿಂದ ಕರಾವಳಿಗೆ ಕರೆ ತಂದ ವಿಮಾನ 10.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಅದರಲ್ಲಿ 40 ಗರ್ಭಿಣಿಯರ ಸಹಿತ 179 ಪ್ರಯಾಣಿಕರು ಆಗಮಿಸಿದ್ದಾರೆ. ಇದು ಪ್ರಯಾಣ ದರ ದುಬಾರಿ ಇರುವ ವಿಮಾನವಾಗಿದೆ. ಅಲ್ಲದೆ ಬರುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕೆಂದು ನಿಯಮಕ್ಕೆ ಒಪ್ಪಿದವರನ್ನು ಮಾತ್ರ ಕರೆ ತರಲಾಗಿತ್ತು. ಕ್ವಾರಂಟೈನ್ ವ್ಯವಸ್ಥೆಗೂ ಹೊಟೇಲ್ಗಳನ್ನು ಗ್ರೇಡ್ 1, ಗ್ರೇಡ್ 2 ಅಂತ ಮಾಡಲಾಗಿತ್ತು. ಹೊಟೇಲ್ನ 14 ದಿನಗಳ ದರದ ಮಾಹಿತಿಯನ್ನು ವೆಬ್ಸೈಟ್ನಲ್ಲಿ ತಿಳಿಸಲಾಗಿತ್ತು. ಇದು ಸರಕಾರದ ಆದೇಶವಾಗಿದ್ದು, ಇದಕ್ಕೆ ಒಪ್ಪಿದವರನ್ನು ಮಾತ್ರ ಕರೆ ತರಲಾಗಿದೆ.
ಈ, ಇ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |