Urdu   /   English   /   Nawayathi

ಮೈಸೂರು: ಕಬ್ಬು ಕಟಾವು ಮಾಡುವಾಗ ಕಂಡ ಚಿರತೆ ಮರಿಗಳನ್ನು ಮುದ್ದಾಡಿದ ಗ್ರಾಮಸ್ಥರು

share with us

ಮೈಸೂರು: 03 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಅಮ್ಮನಿಗಾಗಿ ಕಾದು ಬೆಚ್ಚನೆ ಮಲಗಿದ್ದ ಮೂರು ಮುದ್ದು ಚಿರತೆ ಮರಿಗಳನ್ನು ಕಂಡ ಗ್ರಾಮಸ್ಥರು ಎತ್ತಿ ಮುದ್ದಾಡಿದ್ದಾರೆ. ತಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದಲ್ಲಿ ಊಟಿ ನಂಜುಂಡೇಗೌಡ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವಾಗ 8 ದಿನಗಳ ಹಿಂದೆ ಜನ್ಮ ತಾಳಿರುವ ಮರಿಗಳು ಪತ್ತೆಯಾಗಿವೆ. ಇದನ್ನು ಕಂಡು ಭಯಭೀತರಾದ ಗ್ರಾಮಸ್ಥರು ಹತ್ತಿರ ಹೋಗಲು ಹೆದರಿದ್ದಾರೆ. ಮರಿಗಳ ಬಳಿ ಒಂದು ಗಂಟೆ ಕಳೆದರು ತಾಯಿ ಚಿರತೆ ಬಾರದೇ ಇದ್ದದರಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ, ನಂತರ ಚಿರತೆ ಮರಿಗಳನ್ನು ರಕ್ಷಿಸಿದ್ದಾರೆ. ಈಗಾಗಲೇ ಮೂರುನಾಲ್ಕು ಚಿರತೆ ಸೆರೆ ಹಿಡಿದಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಈಗ ಸಿಕ್ಕಿರುವ ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲದೇ ತಾಯಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا