Urdu   /   English   /   Nawayathi

ಹುಬ್ಬಳ್ಳಿಯಲ್ಲಿ ಸಿಎಂ ಕುಮಾರಸ್ವಾಮಿ ತಂಗಿದ್ದ ಹೊಟೇಲ್ ಮೇಲೆ ಐಟಿ ದಾಳಿ

share with us

ಬೆಂಗಳೂರು: 14 ಮೇ (ಫಿಕ್ರೋಖಬರ್ ಸುದ್ದಿ) ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಂಗಿದ್ದ ಹೊಟೇಲ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಇಲಾಖೆಯ ತನಿಖಾ ತಂಡದ 8 ಜನ ಅಧಿಕಾರಿಗಳ ತಂಡ ಕಳೆದ ರಾತ್ರಿ 9.30ರ ಸುಮಾರಿಗೆ ಹುಬ್ಬಳ್ಳಿಯ ಡೆನ್ನಿಸನ್ ಅಂಡ್ ಕಾಟನ್ ಕೌಂಟಿ ಹೊಟೇಲ್ ಒಳಗೆ ಹೋದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವರಾದ ಡಿ ಕೆ ಶಿವಕುಮಾರ್ ಮತ್ತು ಜಮೀರ್ ಅಹ್ಮದ್ ಖಾನ್ ತಂಗಿದ್ದ ರೂಂ ಒಳಗೆ ಹೋಗಿ ತಪಾಸಣೆ ನಡೆಸಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಸಿಎಂ ಹಣ ಒಯ್ದಿದ್ದರು ಎಂಬ ಮಾಹಿತಿ ಸಿಕ್ಕಿ ಸಂಶಯದ ಆಧಾರದ ಮೇಲೆ ಅಧಿಕಾರಿಗಳು ಹೊಟೇಲ್ ಗೆ ಹೋಗಿ ತನಿಖೆ ನಡೆಸಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಸಿಎಂ ಆಗಲಿ, ಶಿವಕುಮಾರ್ ಅಥವಾ ಜಮೀರ್ ಯಾರೂ ಸಂಪರ್ಕಕ್ಕೆ ಸಿಗಲಿಲ್ಲ. ಬೆಳಗಾವಿ ಮತ್ತು ಗೋವಾ ಭಾಗದ ಐಟಿ ಅಧಿಕಾರಿಗಳ ತಂಡ ಜಂಟಿಯಾಗಿ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಹೊಟೇಲ್ ಮೇಲೆ ದಾಳಿ ನಡೆಸಿದ್ದಾರೆ. ನಂತರ ಅಧಿಕಾರಿಗಳು ಹೊಟೇಲ್ ರೂಂನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಳೆದೊಂದು ವಾರದಲ್ಲಿ ಹೊಟೇಲ್ ಮೇಲೆ ರಾಜಕಾರಣಿಗಳು ತಂಗಿದ್ದ ವೇಳೆ ದಾಳಿ ನಡೆಸುತ್ತಿರುವುದು ಇದು ಎರಡನೇ ಸಲ. ದಾಳಿಯ ನಂತರದ ಬಗ್ಗೆ ವಿವರಗಳು ಲಭ್ಯವಾಗಿಲ್ಲ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا