Urdu   /   English   /   Nawayathi

ಹಲ್ಲೆ ನನ್ನ ಮೇಲಲ್ಲ, ದೆಹಲಿ ಜನರ ಮೇಲಾಗಿದ್ದು: ಕೇಜ್ರಿವಾಲ್‌

share with us

ಹೊಸದಿಲ್ಲಿ: 05 ಮೇ (ಫಿಕ್ರೋಖಬರ್ ಸುದ್ದಿ) ರ‍್ಯಾಲಿಯಲ್ಲಿ ಭಾಗವಹಿಸಿದ್ದಾಗ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ ಬಗ್ಗೆ ಅರವಿಂದ್‌ ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹಲ್ಲೆ ನನ್ನ ಮೇಲಾಗಿಲ್ಲ, ದೆಹಲಿ ಜನರ ತೀರ್ಪಿನ ಮೇಲಾಗಿದೆ ಎಂದು ಕೇಜ್ರಿವಾಲ್‌ ಭಾನುವಾರ ಹೇಳಿಕೆ ನೀಡಿದ್ದಾರೆ. ಮೋತಿನಗರದಲ್ಲಿ ರೋಡ್‌ಶೋದಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್‌, ಜನರಿಗೆ ಕೈಬೀಸುತ್ತಾ ಸಾಗಿದ್ದರು. ಈ ವೇಳೆ ವ್ಯಕ್ತಿ ಯೊಬ್ಬ ವಾಹನವನ್ನೇರಿ ಕೇಜ್ರಿವಾಲ್‌ಗೆ ಹೊಡೆದಿದ್ದ. ಥಳಿಸಿದ ವ್ಯಕ್ತಿಯನ್ನು ತಕ್ಷಣ ಬಂಧಿಸಲಾಗಿದೆ. ತನಿಖೆ ನಡೆ ಸಲಾಗುತ್ತಿದೆ ಎಂದು ಪೊಲೀಸರು ತಿಳಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا