Urdu   /   English   /   Nawayathi

ಹುಡುಗಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ... ಆಕೆಗಾಗಿ ಅವರಿಬ್ಬರೂ ಹಿಡಿದರು ಮಚ್ಚು, ಲಾಂಗು

share with us

ಬೆಂಗಳೂರು: 26 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಹುಡುಗಿಯೊಬ್ಬಳ ಪ್ರೀತಿ ವಿಚಾರವಾಗಿ, ಇಬ್ಬರು ಹುಡುಗರ ನಡುವೆ ಶುರುವಾದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ನಗರದ ಟ್ಯಾನಿ ರೋಡ್​ ನಿವಾಸಿಯಾಗಿರುವ ಸಲೀಂ ವೃತ್ತಿಯಲ್ಲಿ ಮೆಕಾನಿಕ್​ ಆಗಿದ್ದ, ಕಳೆದ ಶನಿವಾರ ಸಂಜೆ ಡಿಯೋ ಬೈಕ್​​ನಲ್ಲಿ ಬಂದಿದ್ದ, ಐವರು ಆರೋಪಿಗಳು ಸಲೀಂನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಇವರಲ್ಲಿ ನಾಲ್ಕು ಜನರನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮುನೀರ್​​, ಸೈಯ್ಯದ್​​, ಶೋಯಭ್​​, ಹಿದಾಯತ್​​ ಬಂಧಿತ ಆರೋಪಿಗಳು. ಈ ಕುರಿತು ಈಟಿವಿ ಭಾರತ್​ಗೆ ಡಿಸಿಪಿ ರಾಹುಲ್​ ಮಾಹಿತಿ ನೀಡಿದ್ದಾರೆ. ಕಳೆದ 23 ರಂದು ಕೊಲೆಯಾದ ಸಲೀಂ ತನ್ನ ಏರಿಯಾದ ಯುವತಿಯೊಬ್ಬಳನ್ನ ಪ್ರೀತಿಸ್ತಿದ್ನಂತೆ. ಆದ್ರೆ ಅದೇ ಯುವತಿಯನ್ನ ಮುನೀರ್ ಕೂಡ ಇಷ್ಟಪಡಲು ಶುರು ಮಾಡಿದ್ದ. ಇದೇ ವಿಚಾರಕ್ಕೆ ವರ್ಷದ ಹಿಂದೆ ಸಲೀಂ ಹಾಗೂ ‌ಮುನೀರ್​​ಗೆ ಜಗಳವಾಗಿತ್ತು. ಆ ವೇಳೆ ಸಲೀಂ ತನ್ನ ಹುಡುಗಿ ಕಡೆ ತಿರುಗಿ ನೋಡಿದ್ರೆ ಅಷ್ಟೆ, ಅಂತ ‌ಮುನೀರ್​​ಗೆ ವಾರ್ನ್ ಮಾಡಿ ಕಳುಹಿಸಿದ್ನಂತೆ. ಅಷ್ಟಕ್ಕೆ ಸುಮ್ಮನಾಗದ ಸಲೀಂ ಇತ್ತೀಚೆಗೆ ಏರಿಯಾ ತುಂಬಾ ಮುನೀರ್​​​ನನ್ನ ಸುಮ್ಮನೇ ಬಿಡೊಲ್ಲ ಅವನಿಗೆ ಮತ್ತೆ ಹೊಡಿತೀನಿ ಅಂತ ಹೇಳ್ತಿದ್ನಂತೆ. ಸಲೀಂನನ್ನ ಹಾಗೆ ಬಿಟ್ರೆ, ನಮ್ಮನ್ನ ಹೊಡೆದು ಮುಗಿಸ್ತಾನೆ. ಅಂತ ತಿಳಿದ ಮುನೀರ್ ಕಳೆದ ಶನಿವಾರ ಸಲೀಂನ ಮೆಕಾನಿಕ್ ಶಾಪ್ ಬಳಿ ತನ್ನ ಹುಡುಗರ ಜೊತೆ ಬಂದವನೇ ಮಚ್ಚು ಲಾಂಗುಗಳಿಂದ ಸಲೀಂ ಮೇಲೆ ಅಟ್ಯಾಕ್‌ ಮಾಡಿ, ಕೊಂದು‌ ಮುಗಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸದ್ಯ ಘಟನೆ ಸಂಬಂಧ ಐಪಿಸಿ 302 ಅಡಿಯಲ್ಲಿ ನಾಲ್ವರು ಆರೋಪಿಗಳನ್ನ ಬಂಧಿಸಿ, ಜೈಲಿಗಟ್ಟಿರುವ ಪೊಲೀಸರು ಎಸ್ಕೇಪ್ ಆಗಿರೋ ಮತ್ತೊಬ್ಬ ಆರೋಪಿ ಶಬರೀಶ್​​ಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا