Urdu   /   English   /   Nawayathi

ಚಲಿಸುತ್ತಿದ್ದ ರಿಕ್ಷಾ ಅಡ್ಡ ಹಾಕಿ 5 ಲಕ್ಷ ದೋಚಿದ ಖದೀಮರ ಬಂಧನ

share with us

ಮಂಗಳೂರು: 06 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಮಂಗಳೂರಿನ ಅಮರ್ ಆಳ್ವ ರಸ್ತೆಯ ಬಳಿ ಚಲಿಸುತ್ತಿದ್ದ ರಕ್ಷಾವೊಂದನ್ನು ಅಡ್ಡ ಹಾಕಿ ದುಷ್ಕರ್ಮಿಗಳ ತಂಡವೊಂದು ಐದು ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗುತ್ತಿದ್ದ ವೇಳೆ ಪೋಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ ಎನ್ನಲಾಗಿದೆ. ಮುಂಬೈಯಿಂದ ಮಂಗಳೂರಿಗೆ ರೈಲಿನಲ್ಲಿ ನಾಲ್ಕು ಜನರು ಬಂದಿದ್ದರು. ಅವರ ಬಳಿ ಮೀನುಗಾರಿಕೆಗೆ ಸಂಬಂಧಪಟ್ಟ 5 ಲಕ್ಷ ರೂಪಾಯಿಗಳಿದ್ದು, ಹಣವನ್ನು ಮಂಗಳೂರು ನಗರದ ವ್ಯಕ್ತಿಗೆ ಕೊಡಲು ರಿಕ್ಷಾವೊಂದರಲ್ಲಿ ಪಂಪ್ವೆಲ್ ಕಡೆಗೆ ಹೋಗುತ್ತಿರುವಾಗ ಏಕಾ ಏಕಿ ಚಲಿಸುತ್ತಿದ್ದ ರಿಕ್ಷಕ್ಕೆ ಟವೇರಾ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಅಡ್ಡ ಹಾಕಿ 5 ಲಕ್ಷ ರೂ ದೋಚಿ ಪರಾರಿಯಾಯಿತು. ಕಂಕನಾಡಿ ಪೋಲೀಸ್ ಠಾಣೆಗೆ 5 ಲಕ್ಷ ರೂ ದರೋಡೆಯಾದ ದೂರು ದೊರಕಿದ್ದು, ಈ ದೂರಿನ ಮೇರೆಗೆ ಪೋಲೀಸರ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಹೆಜಮಾಡಿಯಿಂದ ಉಡುಪಿಯ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಕಾಪುವಿನ ಹತ್ತಿರ ಹೋಗುತ್ತಿದ್ದ ಟವೇರಾ ವಾಹನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಸತ್ಯಾಂಶಕ್ಕಾಗಿ ತನಿಖೆ ನಡೆಯುತ್ತಿದೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا