Urdu   /   English   /   Nawayathi

ಶ್ರೀಗಳ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ ; ಓರ್ವ ಸಾವು

share with us

ಚಿಕ್ಕಮಗಳೂರು: 22 ಜನುವರಿ (ಫಿಕ್ರೋಖಬರ್ ಸುದ್ದಿ) ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಪಡೆದು ವಾಪಾಸಾಗುತ್ತಿದ್ದ ಬೊಲೆರೋ ಕಾರೊಂದು ಮರಕ್ಕೆ ಢಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿ, 6 ಮಂದಿ ಗಾಯಗೊಂಡ ದುರ್ಘ‌ಟನೆ ಕಡೂರಿನ ಗದ್ಲೆಹಳ್ಳಿಯ ಬಳಿ ಮಂಗಳವಾರ ನಡೆದಿದೆ. ಪರಮೇಶ್ವರಪ್ಪ ಎನ್ನುವ 40 ವರ್ಷದ ವ್ಯಕ್ತಿ ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಸಾವನ್ನಪ್ಪಿದ್ದು,6 ಮಂದಿ  ಗಾಯಗೊಂಡಿದ್ದು ಕಡೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಬ್ಬರ ಸ್ಥಿತಿ ಗಂಭೀರವಾಗಿದ್ದು ಶಿವಮೊಗ್ಗದ  ಮೆಗ್ಗಾನ್‌ಗೆ ಸ್ಥಳಾಂತರಿಸಲಾಗಿದೆ. ಬೊಲೆರೋದಲ್ಲಿ ಬಂದಿದ್ದ 7 ಮಂದಿ ಸೋಮವಾರ ರಾತ್ರಿ ಶ್ರೀಗಳ ಲಿಂಗಶರೀರದ ಅಂತಿಮ ದರ್ಶನ ಪಡೆದು ವಾಪಾಸಾಗುತ್ತಿದ್ದರು. 

ಕಡೂರು ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا