Urdu   /   English   /   Nawayathi

ಮಂಗಳೂರು : ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಮಾರಾಮಾರಿ !

share with us

ಮಂಗಳೂರು: 09 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ನಲ್ಲಿ  ಭಿನ್ನಮತ ಭುಗಿಲೆದ್ದಿದ್ದು ಇಬ್ಬರು ಮುಖಂಡರ ಬೆಂಬಲಿಗರ ನಡುವೆ ಪ್ರಮುಖ ನಾಯಕರ ಎದುರೇ ಗುರುವಾರ ಮಾರಾಮಾರಿ ನಡೆದಿದೆ. ಪುರ  ಭವನದಲ್ಲಿ ನಡೆದ ಕ್ವಿಟ್‌ ಇಂಡಿಯಾ ಕಾರ್ಯಕ್ರಮದಲ್ಲಿ  ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ  ಮತ್ತು ಪುನೀತ್‌ ಶೆಟ್ಟಿ ಬೆಂಬಲಿಗರ ನಡುವೆ ಹೊಡೆದಾಟ ನಡೆದಿದೆ. 

ವೇದಿಕೆ ಮುಂಭಾಗದಲ್ಲೇ ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿ ಸೋಜಾ ಅವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಯುವ ನಾಯಕ ಪುನೀತ್‌ ಶೆಟ್ಟಿ ಮೇಲೆ ಕೆಲವರು ಮುಗಿ ಬಿದ್ದು ಹಲ್ಲೆ  ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪುನೀತ್‌ ಶೆಟ್ಟಿ  ಐವಾನ್‌ ಡಿ ಸೋಜಾ ಅವರ ಬೆಂಬಲಿಗರು ಎಂದು ಹೇಳಲಾಗಿದೆ. ಮಾಜಿ ಸಚಿವ ರಮಾನಾಥ ರೈ ಅವರ ಸಮ್ಮುಖದಲ್ಲೇ ಈ ಘರ್ಷಣೆ ನಡೆದಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.  

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا