Urdu   /   English   /   Nawayathi

ರಿಕ್ರಿಯೇಷನ್ ಕ್ಲಬ್ ಮಾಲೀಕನ ಕೊಲೆ: ಕೆಲವೇ ಗಂಟೆಗಳಲ್ಲಿ ಆರೋಪಿಗಳ ಸೆರೆ

share with us

ಉಡುಪಿ: 30 ಜುಲೈ (ಫಿಕ್ರೋಖಬರ್ ಸುದ್ದಿ) ಮಣಿಪಾಲ ಪೆರಂಪಳ್ಳಿ ರಸ್ತೆಯ ರಿಕ್ರಿಯೇಷನ್‌ ಕ್ಲಬ್‌ (ಇಸ್ಪೀಟ್‌) ಮಾಲೀಕನನ್ನು ದುಷ್ಕರ್ಮಿಗಳ ತಂಡ ಭಾನುವಾರ ಹಾಡಹಗಲೇ ಇರಿದು ಕೊಲೆ ಮಾಡಿದೆ. ಶಾಸಕ ಕೆ. ರಘಪತಿ ಭಟ್‌ ಅವರ ಸಂಬಂಧಿಯಾದ ಪುತ್ತೂರು ಸುಬ್ರಹ್ಮಣ್ಯನಗರ ನಿವಾಸಿ ಗುರುಪ್ರಸಾದ್‌ ಭಟ್‌ (41) ಕೊಲೆಗೀಡಾದವರು. ಮಧ್ಯಾಹ್ನ 1. 10 ಕ್ಕೆ ಬಿಳಿ ಬಣ್ಣದ ಒಮಿನಿ ವಾಹನದಲ್ಲಿ ಆಗಮಿಸಿದ 4 ಮಂದಿ ದುಷ್ಕರ್ಮಿಗಳು ರಿಕ್ರಿಯೇಷನ್‌ ಕ್ಲಬ್‌ಗೆ ಏಕಾಏಕಿ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ್ದ ಗುರುಪ್ರಸಾದ್‌ ಅವರನ್ನು ತಕ್ಷಣ ಅವರದೇ ಕಾರಿನಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಅವರು ಮೃತಪಟ್ಟರು. 

ಗುರುಪ್ರಸಾದ್‌ ಸೈಬರ್‌ ಸೆಂಟರ್‌ ಸೇರಿದಂತೆ ನಾನಾ ವ್ಯವಹಾರ ನಡೆಸುತ್ತಿದ್ದು, ಅನೇಕರೊಂದಿಗೆ ಆರ್ಥಿಕ ವ್ಯವಹಾರ ಇಟ್ಟುಕೊಂಡಿದ್ದರು. ಇದೇ ಕಾರಣಕ್ಕೆ ಕೊಲೆ ನಡೆದಿರಬೇಕು ಎಂದು ಶಂಕಿಸಲಾಗಿದೆ. ಕೆಲ ವರ್ಷಗಳ ಹಿಂದೆ ಇವರು ವಾರ ಪತ್ರಿಕೆಯೊಂದನ್ನು ಸಹ ನಡೆಸುತ್ತಿದ್ದರು. 

ಮೊಣಕಾಲಿನಲ್ಲಿ ಕೂರಿಸಿ ಇರಿದು ಕೊಲೆಗೈದರು!: 
ದುಷ್ಕರ್ಮಿಗಳು ಕ್ಲಬ್‌ಗೆ ನುಗ್ಗಿ ಮೊದಲಿಗೆ ಗುರುಪ್ರಸಾದ್‌ ಅವರಿಗೆ ಥಳಿಸಿದ್ದಾರೆ. ಗುರುಪ್ರಸಾದ್‌ ಅವರನ್ನು ಮೊಣಕಾಲಿನಲ್ಲಿ ಕೂರಿಸಿ,ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆನ್ನಲಾಗಿದೆ. 

ಆರೋಪಿಗಳ ಭಾವಚಿತ್ರ ಪತ್ತೆ : 

ಕ್ಲಬ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಚಿತ್ರ ಸೆರೆಯಾಗಿದ್ದು, ಇದರ ಜಾಡು ಹಿಡಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಶವಾಗಾರಕ್ಕೆ ಭೇಟಿ ಕೊಟ್ಟ ಶಾಸಕ ಕೆ. ರಘುಪತಿ ಭಟ್‌ ಮಾಧ್ಯಮದೊಂದಿಗೆ ಮಾತನಾಡಿ, ''ನನ್ನ ಸೋದರಮಾವನ ಮಗನಾಗಿದ್ದ ಗುರುಪ್ರಸಾದ್‌ ತನ್ನ ವ್ಯವಹಾರದ ಬಗ್ಗೆ ಯಾರೊಂದಿಗೆ ಮಾತನಾಡುತ್ತಿರಲಿಲ್ಲ. ಈ ಕ್ಲಬ್‌ ತೆರೆದಿರುವ ಬಗ್ಗೆಯೂ ಮನೆಯವರಿಗೆ, ಹೆಂಡತಿಗೂ ಗೊತ್ತಿಲ್ಲ. ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕಿದೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವ ಬಗ್ಗೆಯೂ ತಿಳಿದಿಲ್ಲ ,''ಎಂದರು. 

ನಾಲ್ಕು ಮಂದಿ ದುಷ್ಕರ್ಮಿಗಳ ತಂಡ ಕೃತ್ಯ ನಡೆಸಿದ್ದು, ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا