Urdu   /   English   /   Nawayathi

ಪತ್ನಿಯ ಶೀಲ ಶಂಕಿಸಿ ಬೆಂಕಿ ಹಚ್ಚಿದ ಪತಿ

share with us

ಕಲಬುರ್ಗಿ: 09 ಜೂನ್ (ಫಿಕ್ರೋಖಬರ್ ಸುದ್ದಿ) ಆಳಂದ ತಾಲ್ಲೂಕು ಕೊಡಲಹಂಗರಾದಲ್ಲಿ ಪತ್ನಿಯ ಶಾರದಾಬಾಯಿ(20) ಶೀಲ ಶಂಕಿಸಿ ಪತಿಯೇ ಬೆಂಕಿ ಹಚ್ಚಿದ್ದಾನೆ. ಮುಖ ಸೇರಿದಂತೆ ದೇಹದ ಬಹುತೇಕ ಭಾಗ ಬೆಂಕಿಯಿಂದ ಸುಟ್ಟಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾರದಾಬಾಯಿ ಪರಿಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ಬಗ್ಗೆ ಹೋರಾಡುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೊಡಲಹಂಗರಗಾದ ವೀರಣ್ಣ ಅವರ ಜತೆ ವರ್ಷದ ಹಿಂದೆ ಶಾರಾದಾಬಾಯಿ ಅವರ ವಿವಾಹವಾಗಿತ್ತು. ವೀರಣ್ಣ ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ ಅತ್ತೆ ನೀಲಮ್ಮ, ಮಾವ ಗುಂಡಪ್ಪ ಗಂಡ ವೀರಣ್ಣ ಅವರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಶಾರದಾಬಾಯಿ ತವರು ಮನೆಯವರು ಆರೋಪಿಸಿದ್ದಾರೆ.

ಬೆಂಕಿ ಹಚ್ಚಿದ ನಂತರ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ ಪತಿ, ಅತ್ತೆ, ಮಾವ ನಾಪತ್ತೆಯಾಗಿದ್ದಾರೆ ಎಂದು ದೂರಿದ್ದಾರೆ.

ಸಂಶಯ ಸ್ವಭಾವದವನಾಗಿದ್ದ ಪತಿ, ನಿನ್ನ ನಡತೆ ಸರಿಯಿಲ್ಲ ಎಂದು ವಿನಾಕಾರಣ ಜಗಳ ಮಾಡಿ ಹಲ್ಲೆ ಮಾಡುತ್ತಿದ್ದ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. 

ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا